ಗುರುವಾರ, ಆಗಸ್ಟ್ 22, 2013

ಚಿರಂಜೀವಿ ...

ಚಿರಂಜೀವಿ ...

ನೆನ್ನೆ ನನ್ನ ಹಳೆಯ ಕೂಡಿಟ್ಟ ಹಾಡುಗಳಲ್ಲಿ ಒಂದು ಹಾಡು ಗಮನ ಸೆಳೆಯಿತು...

"ಆಡಿಸುವಾತ ಬೇಸರಗೊಂಡು ಆಟ ಮುಗಿಸಿದ"...

ಈ ಹಾಡಿನ ತುಣುಕಿನಲ್ಲಿ ಒಂದು ಧನಾತ್ಮಕ ಭಾಗ ಇದೆ, ಆಡಿಸುವಾತನಿಗೆ ಬೇಸರ ಆಗದೆ ಇರೋ ಹಾಗೆ ನೋಡ್ಕೊಂಡ್ರೆ ನಾವು ಚಿರಂಜೀವಿ:-) ಆಹಾ! ಸಾವಿಗೆ ಎಂಥ ಔಷಧಿ !! ಅವನಾಟಿಗೆಯ ಒಳಗೆ ಅವನು ಜೀವ ತುಂಬಿ ಕಳಿಸೋದು ಜೀವಂತವಾಗಿ ಬದುಕಲಿ ನೋಡಿದವರಿಗೆ ಒಳ್ಳೆಯ ಮನೋಭಾವವುಳ್ಳ ಮನೋರಂಜನೆಯಾಗಿರಲಿ ಅಂತನೇ ಹೊರತು ಆಗೊಮ್ಮೆ ಈಗೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಸೋತು ಸತ್ತು ಬದುಕಲಿ ಅಂತ ಅಲ್ಲ. ಅವನಿಗೆ ಬೇಸರ ಆಗೋದು ಕೂಡ ಅದೇ ಕಾರಣಕ್ಕೆ.

ಮುಂದಿನ ಪ್ರಶ್ನೆ ಏನಪ್ಪಾ ಅಂದ್ರೆ, ಅವನನ್ನ ಹೇಗೆ ಬೇಸರ ಬರದೆ ಇರೋ ಹಾಗೆ ನೋಡ್ಕೊಳ್ಳೋದು? ಅನುಭವಕ್ಕೆ ಬರೋ, ನಮ್ಮ ಇತಿ ಮಿತಿಯಲ್ಲಿರೋ,ಕಷ್ಟನೋ-ಸುಖಾನೋ, ಪ್ರತಿಯೊಂದು ಕ್ಷಣದಲ್ಲಿ ನಾವು ಗೆಲುವಾಗಿ ಇದ್ರೆ ಅದೇ ಅವನಿಗೆ ಒಂಥರಾ ಮನೋರಂಜನೆ. ಏನಪ್ಪಾ ಇವನಿಗೆ ಇಷ್ಟು ಕಷ್ಟ ಕೊಟ್ರು ಇನ್ನು ಗೆಲುವಾಗೆ ಇದಾನೆ!!, ಇನ್ನೊಂದು ಪರೀಕ್ಷೆ ಕೊಡೋಣ ಅಂತ ಮತ್ತೆ ತನ್ನ ಆಟ ಮುಂದುವರೆಸ್ತಾನೆ. ತನ್ನ ಸುಮ್ಮನೆ ಉರುಳಿಹೋಗದ ಆಟಿಗೆಗಳನ್ನ ಅವನು ಬೇಸರಗೊಂಡು ಮಾಡಿಲ್ಲ, ಉತ್ಸುಕತೆಯ ಮಡಿಲ್ಲಲ್ಲಿ ಎತ್ತಿ ಆಡಲು ಬಿಟ್ಟಿಹ...

ಆಟದಲ್ಲಿ ಅನ್ವೇಷಣೆ, ಕಷ್ಟ, ಸೋಲು, ಒಂದರ ನಂತರ ಮತ್ತೊಂದು ಹಂತಗಳು ಇರಲೇಬೇಕಾದಂತ ಭಾಗಗಳು.

ರುದ್ರಪ್ಪ...

ಕಾಮೆಂಟ್‌ಗಳಿಲ್ಲ: