ಶುಕ್ರವಾರ, ಆಗಸ್ಟ್ 30, 2013

ಮತ್ತೆ ಮನ್ವಂತರ...

ಮತ್ತೆ ಮನ್ವಂತರ 

ಭಾವ, ತರ್ಕಗಳ 

ಎದುರು ಬದುರಿನ ವಕಾಲತ್ತು, 
ಹೃದಯ ಮಿದುಳಿಗೀಗ 
ವಿಚ್ಛೇದನ, 
ಕೊನೆಗೂ ಬಂತು 
ಕನಸುಗಳಿಗೆ ಸ್ವೇಚ್ಛೆಯ ಸ್ವಾತಂತ್ರ್ಯ
ಮಧ್ಯರಾತ್ರಿಗೆ,

ಒಂದೇ ರಾತ್ರಿ  
ಬಿಟ್ಟಿರದ ದಂಪತಿಗಳು  
ಒಂದೇ ಕಂಬಳಿಯಡಿಯಲಿ 
ನೋಡಲು ಬೆಳಿಗ್ಗೆಗೆ 

ಮತ್ತೆ ಮೋಹ ತುಡಿವ 

ಮುಂಜಾವಿನಲಿ 
ಪ್ರೀತಿ ಕಣ್ಬಿಡುವ 
ಸಲ್ಲಾಪದಲಿ 

ತಂ ತಮ್ಮವೆಂಬಂತೆ 

ಬೇರ್ಪಡಿಸಿ ಕೂಡಿಟ್ಟ 
ಅದೆಷ್ಟೋ ಆಸೆಗಳೇ ಸಂಪದವೀಗ, 
ಕುರಿತು ಎದುರು ಕೂತು  
ಅದೇ ಪ್ರೇಮಿಗಳ ಸಂವಾದವೀಗ 

ಬಿಟ್ಟಿರದ ಒಲವ ಬೆಳಗಿನಲಿ 

ಮೂಡುತಿದೆ ಸಮನ್ವಯ 
ನನ್ನೊಳವಿಗೆ 
ನನ್ನೊಳಿತಿಗೆ 
ಕಾಣುತಿದೆ   
ಕಾಡುತಿದೆ 
ಮತ್ತೆ ಮನ್ವಂತರ.. ಮತ್ತೆ ಮನ್ವಂತರ... 

ರುದ್ರಪ್ಪ...  

1 ಕಾಮೆಂಟ್‌:

Badarinath Palavalli ಹೇಳಿದರು...

ನವ ಮನ್ವಂತರದ ಬಯಕೆಯಲೇ ಸಮನ್ವಯ ಸಾಧನೆ ದಿನ ದಿನ ಅನುಕ್ಷಣ.