ಬುಧವಾರ, ಸೆಪ್ಟೆಂಬರ್ 25, 2013

ಎರಡು ಕವಿತೆಗಳ ನಡುವೆ

ಎರಡು ಕವಿತೆಗಳ ನಡುವೆ 

ಗರ್ಭ ಕಟ್ಟುತಿಲ್ಲ!
ಮನಸಿಗಿಂದು ಮಧ್ಯ
ವಿರಾಮದ 
ವಿಲಾಸಿ ಹಣೆಪಟ್ಟಿ 
ಕಂಡವರು  
ಹಳಿದವರು 
ಹೇಳಿದರು ಭಾವ 
ಬಂಜೆಯಾದಳೆಂದು
ಗೊಡ್ಡು ಲೇಖನಿಯೆಂದು 

ಅವರಿಗೆಲ್ಲ ಗೊತ್ತಿಲ್ಲ 
ಅನು ದಿನವು 
ನಾನೊಂದು ಕವಿತೆ 
ಅವನೊಂದು ಕವಿತೆ 
ಇವನೊಂದು ಕವಿತೆ 
ಅವರವರ ಇತಿಹಾಸಕ್ಕೆ !!

ರುದ್ರಪ್ಪ.